|| ಶ್ರೀಕೃಷ್ಣ ಸ್ತುತಿ ||
ಗೊಲ್ಲ ಬಾಲರೊಡನೆ ಕೂಡಿ
ಗೊಲ್ಲತಿಯರ ಮನೆಯೊಳಂದು
ನಿಲ್ಲದೋಡಿ ಬೆಣ್ಣೆ ಕದ್ದು ಚೋರನಾದೆಯಾ|
ಮಲ್ಲವೀರರೊಡನೆ ಸೆಣಸಿ
ಖುಲ್ಲ ಕಂಸನನ್ನು ಮಡುಹಿ
ಪುಲ್ಲನಾಭ ಹರಿಯೆ ಜಗಕೆ ನಾಥನಾದೆಯಾ||
ಅಣ್ಣ ರಾಮನೊಡನೆ ಸೇರಿ
ಬಣ್ಣ ಬಣ್ಣ ವೇಷ ಹಾಕಿ
ಹೆಣ್ಣ ಸೀರೆ ಕದ್ದ ಕೃಷ್ಣ ಕಳ್ಳನಾದೆಯಾ|
ಮಣ್ಣ ಮೆದ್ದುದನ್ನು ಕಂಡು
ಚಿಣ್ಣ ನಿನ್ನ ಗೋಪಿ ಹೊಡೆಯೆ
ಸಣ್ಣ ಮೊಗದಿ ತಾಯ್ಗೆ ಜಗವ ತೋರಿ ಮೆರೆದೆಯಾ||
ಸತ್ಯಭಾಮೆ ರುಕ್ಮಿಣಿಯರು
ನಿತ್ಯಸೇವೆ ಮಾಡುತಿರಲು
ಮಿಥ್ಯ ನುಡಿದು ಸತಿಯರೊಳಗೆ ಜಗಳ ತಂದೆಯಾ|
ನೃತ್ಯ ಮಾಡಿ ಹಾವ ಹೆಡೆಲಿ
ಸತ್ಯವಂತರನ್ನು ಸಲಹಿ
ಪೃಥ್ವಿಗಿಳಿದು ಬಂದು ರಜತಪುರದಿ ನಿಂದೆಯಾ||
ನಿನ್ನ ಪೂಜೆ ಮಾಡಲೆನೆಗೆ
ಮುನ್ನ ಶಕ್ತಿಯನ್ನು ನೀಡಿ
ಬನ್ನವನ್ನು ಬಹಳ ಬೇಗ ದೂರ ಮಾಡೆಯಾ|
ಚಿನ್ನ ರನ್ನ ಬೇಡಯೆನಗೆ
ಮನ್ನಿಸೆನ್ನ ತಪ್ಪುಗಳನು
ಘನ್ನಮಹಿಮ ಬೇಡಿಕೊಂಬೆ ಕೃಪೆಯ ದೋರೆಯಾ|

0 ಕಾಮೆಂಟ್ಗಳು