ದತ್ತಾತ್ರೇಯ ಮಂಗಳ
ರಾಗ : ಶ್ರೀ ರಾಗ
ತಾಳ : ಆದಿ
|| ಮುತ್ತಿನಾರತಿ | ಎತ್ತಿ ಬೆಳಗುವೆನು |
ಶ್ರೀ ಗುರುದತ್ತನಿಗೆ ||
ಭಕ್ತ ಪಾಲಕ | ಮುಕ್ತಿದಾಯಕ |
ಸಂಗಮೇಶ್ವರನಿಗೆ ||ಮುತ್ತಿನಾರುತಿ ||
ಔದುಂಬರದ ನೆರಳಲಿ ನೆಲೆಸಿಹ|ವಿಶ್ವಾಂಬರನಿಗೆ||
ಅತ್ರಿಮುನಿ | ಅನುಸೂಯ ಪುತ್ರ ಗುರು |
ದತ್ತಾತ್ರೇಯನಿಗೆ ||ಮುತ್ತಿನಾರತಿ ||
ಅಮರಜ ಭೀಮ|ಸಂಗಮದಲ್ಲಿ|ತಪವನು ಗೈದವಗೆ||
ಕರವ ಮುಗಿದರೆ ವರವ ನೀಡುವ|ಕರುಣಾಕರನಿಗೆ||
ಮುತ್ತಿನಾರತಿ ||
ನರಸಿಂಹ ಸರಸ್ವತಿ ಯತಿಕುಲ|ಮೂರುತಿಎತ್ತುವೆನಾರುತಿ||
ಪುಣ್ಯ ಪ್ರಧಾತ|ಶ್ರೀ ಅವಧೂತ|ಸಂಗಮನಾಥನಿಗೆ||
ಮುತ್ತಿನಾರತಿ ||
ತ್ರಿಮೂರ್ತಿ ರೂಪ|ತ್ರಿಲೋಕದೊಡೆಯ
ಶ್ರೀಪಾದವಲ್ಲಭಗೆ ||
ಧರೆಯೊಳು ಮೆರೆಯುವ|ಗಾಣಗಾಪುರದ |
ಶ್ರೀ ಗುರುರಾಯರಿಗೆ || ಮುತ್ತಿನಾರತಿ ||
|| ಜೈ ಜೈ ರಘುವೀರ ಸಮರ್ಥ ||
0 ಕಾಮೆಂಟ್ಗಳು