|| ದತ್ತ ಸ್ತುತಿ ||
ದಯಾಘನ ದತ್ತರಾಜಯೋಗಿ
ಆರತಿ ಜಯ ಜಯ ತ್ರೈಮೂರ್ತಿ ದಯಾಘನ ||ಪ||
ಎರಗಿದ ನರರ ಹಣೆಯೊಳಿರುವ
ದುರಿತವ ದಹಿಸುವ ಗುರುದೇವ
ಕರುಣೆಯ ಸೆಲೆಯ್ದಾರಿಸುವ ಮನವ
ರಮಿಸುವ ಗುಣಗಾನದಿ ದತ್ತ || ೧ ||
ಭಜಕಜನ ಕಾಮಕಲ್ಪಭೋಜ
ಕುಜನಕುಲ ಕಂಗೆಡಿಸುವ ತೇಜ
ನಿಜದ ನೆಲೆಗೊಳಿಸಿದ ಗುರುರಾಜ
ವಿಜಯದ ಮೂರುತಿ ಯತಿರಾಜ || ೨ ||
ಗಾಣಗಾಪುರ ನಿರ್ಗುಣ ಪಾದ
ಕೃಷ್ಣೆಯ ಔದುಂಬರ ಪಾದ
ಧ್ಯಾನಿಪೆ ಅಮರಾಪುರಪಾದ
ಕುರುಪುರ ತಾಣದ ಶ್ರೀಪಾದ || ೩ ||
ಮಣಿಯುವೆ ಕರುಣಿಸು ಅವಧೂತ
ಚಿನುಮಯ ಕೈವಲ್ಯಸುಖದಾತ
ದಣಿಯದೆ ಯೋಗೀಶನ ಚಿತ್ತ
ತಣಿಯಲಿ ಗುಣಗಾನದಿ ದತ್ತ
ದಯಾಘನ ದತ್ತರಾಜಯೋಗೀ ಆರತಿ || ೪ ||
0 ಕಾಮೆಂಟ್ಗಳು