kannadabhajanlyrics.com |
ಜ್ಞಾನ ಪೂರ್ಣ ಜಗನ್ ಜ್ಯೋತಿ
ನಿರ್ಮಲವಾದ ಮನವೆ ಕರ್ಪೂರದಾರತಿ || ಪ ||
ಅನುದಿನ ಗುರುವಿನ ಅನುಗೂಡಿ ಭಕ್ತಿಯಲಿ
ಜನನ ಮರಣ ರಹಿತ ಜಂಗಮಕೆ ಬೆಳಗಿರೆ ॥ ಅ. ಪ.||
ನಾನೀನೆಂಬುದ ಬಿಡಿರಿ
ಸದ್ಗುರು ಪ್ರಾಪ್ತಿ ಜ್ಞಾನಿಗಳೊಡನಾಡಿರಿ
ಸ್ವಾನುಭವದ ಸುಖ ತಾನೆ ಕೈಸೇರುವುದು
ಅನುಭವಿಸಿ ಲಿಂಗಕ್ಕೆ ಮನವೊಪ್ಪಿ ಬೆಳಗಿರೆ
ನಾನಾ ಜನ್ಮದ ಕತ್ತಲೆ ಕಳೆದುಳಿದು ಬೇಗ
ಮಾನವ ಜನ್ಮದ ಬೆಳಕಲ್ಲಿ
ಹೀನವಿಷಯದಾಸೆ ಹಿಂದುಳಿದು ಗುರುವಿನ
ಧ್ಯಾನವೇ ಗತಿಯೆಂದು ಮನವೊಪ್ಪಿ ಬೆಳಗಿರೆ
ಅಷ್ಟವರ್ಣದ ಸ್ಥೂಲದ ಮಾನವ ಜನ್ಮ
ಹುಟ್ಟಿ ಬರುವುದೆ ದುರ್ಲಭ
ಕೊಟ್ಟಾನೆ ಗುರು ಎಮಗೆ ಮುಟ್ಟಿದ ಫಲದಿಂದ
ಹುಟ್ಟಿದ ಮಗಸಿದ್ಧನ್ಹೆಸರಿಟ್ಟು ಬೆಳಗಿರೆ
0 ಕಾಮೆಂಟ್ಗಳು