|| ಗುರು ಸ್ತುತಿ ||
kannadabhajanlyrics.blogspot.com
ಜಯದೇವ ಜಯದೇವ ಜಯ ಸದ್ಗುರುವರಗೇ
ಜಯ ಜಯ ನಿತ್ಯ ನಿರಂಜನ
ನಿರುತಾನಂದನಿಗೇ ಜಯದೇವ ಜಯದೇವ
॥ ಮೂರು ಗುಣಗಳ ಕಾರ್ಯದಿ ಸೇರದಿರುವವಗೆ
ತೋರುವ ಈ ವಿಶ್ವಕೆ ಆಧಾರವೆನಿಸಿಹಗೆ
ಧೀರನಾಗಿಹ ಚಿತ್ಸುಖ ಸಾರರೂಪನಿಗೆ
ನಾರೀನರ ಭೇದಗಳ್ಳತಿ ತೋರದ ಪ್ರಭುವರಗೆ ||೧॥
ಗಣನೆಗೊಗದಿಹನಗಣಿತ ಘನಚಿದ್ರೂಪನಿಗೆ
ದಿನಮಣಿಶಶಿವಹ್ನಿಗಳನು ಅನುದಿನ ಬೆಳಗಿಪಗೆ
ಜನಿಮೃತಿ ಇರದಿಹನದ್ವಯ ಚಿನುಮಯನೆನಿಸಿಹಗೆ
ಮುನಿಜನಹೃದಯವಿಹಾರಿಗೆ ಘನಗುರುಮೂರುತಿಗೆ||೨||
ರಜತಮಸಾತ್ವಿಕವಿರಹಿತ ಅಜನೆನಿಸಿರುವವಗೆ
ನಿಜಜೀವೇಶರಿಗಾಶ್ರಯ ತ್ರಿ ಜಗಮ್ಯಪಕಗೆ
ಅಜಹರಿಹರ ಜಗವಂದಿತ ಭಜಕರ ಸಲಹುವಗೆ
ಸುಜನರ ನಿಜ ಮೃದು ಹೃದಯದಿ
ವಿಜಯದಿ ನಲಿಯುವಗೆ ||೩||
ಸಾಧನೆಯಿಂ ಪರಿಪಕ್ವದ ಸಾಧಕ ಜನಮನ
ಮೋದದಿ ತನ್ನಯ ತತ್ವದ ಬೋಧವನರುಹಲಿಕೆ
ಆದಿಮೂರುತಿ ಶ್ರೀ ಪ್ರಭು ತಾ ದಯಗೊಳ್ಳುತಲಿ
ಮೇದಿನಿಯೊಳಗವತರಿಸಿಹ ಶ್ರೀಧರ ನಾಮದಲಿ||೪||
0 ಕಾಮೆಂಟ್ಗಳು