ಕಪಿಕುಲೇಶ ಹನುಮ ವರದ ರಾಮಚಂದ್ರನಾ ||
ವಿಪುಲನಾಮವನ್ನು ಬಿಡದೆ ಜಪಿಸೋ ಮಾನವ
ಬಾಲ್ಯದಲ್ಲಿ ಕೌಶಿಕ ಋಷಿಯ ವ್ರತವ ಸಲಹಿದ ||
ಫಾಲನೇತ್ರ ಶಿವನ ಧನುವ ಮುರಿದು ಕೆಡಹಿದಾ
ಶೂರತನದಿ ಸೀತೆಯನ್ನು ಮದುವೆಯಾಗುತಾ ||
ಧೀರ ಪರಶುರಾಮನನ್ನು ಭಂಗ ಪಡಿಸಿದ
ಪಿತನ ನೇಮದಿಂದ ವನಕೆ ಹಿತದಿ ತೆರಳಿದ
ಸತತ ದುಷ್ಟಧನುಜರನ್ನು ಬಿಡದೆ ಸೀಳಿದ |
ಸೂರ್ಯಸುತಗೆ ಪಟ್ಟಕಟ್ಟಿ ಪರಮನೆನಿಸಿದ
ಧೈರ್ಯ ಮುದ್ರಿಕೆ ಕಳುಹಿ ತನ್ನ ವಾರ್ತೆ ತಿಳಿಸಿದ ||
ಶರಧಿಗಿರಧಿ ಸೇತುವೆಯಾ ಭರದಿ ಕಟ್ಟಿದ
ದುರುಳ ರಾವಣನನ್ನು ಕೊಂದು ಧರೆಯ ಸಲುಹಿದ ||
ತರುಣಿಯೊಡನೆ ಕೂಡಿ ತನ್ನ ಪುರಕೆ ತೆರಳಿದಾ ||
ಭರತನನ್ನು ಪೊರೆದ ಬಳಿಕ ರಾಜ್ಯವಾಳಿದಾ ||
ಪರಮ ನೇಮದಿಂದ ಸಿಂಹ ಪೀಠವೇರುತಾ
ಶರಣ ಜನರ ಬಿಡದೆ ಕಾಯ್ವ ಪರಮ ಪುರುಷನ
0 ಕಾಮೆಂಟ್ಗಳು