|| ಹನುಮ ಸ್ತುತಿ ||

ರಚನೆ : ವ್ಯಾಸರಾಜರು 

ರಾಗ- ಶುಭಪಂತುವರಾಳಿ 

ತಾಳ- ಆದಿ



ಜಯ ವಾಯು ಹನುಮಂತ 

ಜಯ ಭೀಮ ಬಲವಂತ ||ಪ ||

ಜಯ ಪೂರ್ಣ ಮತಿವಂತ

ಜಯ ಸಲಹೊ ಸಂತ ||ಅ.ಪ||


ಅಂಜನೆಯಲ್ಲಿ ಜನಿಸಿ ಅಂದು ರಾಮನ ಸೇವೆ 

ನಂದದಲಿ ಮಾಡಿ ಕಪಿ ಬಲವ ಕೂಡಿ 

ಸಿಂಧು ಲಂಫಿಸಿ ವನ ಭಂಗಿಸಿ ಸೀತೆ 

ಗುಂಗುರವ ಕೊಟ್ಟೆ ಲಂಕಾಪುರವ ಸುಟ್ಟೆ ||೧||


ಹರಿಗೆ ಚೂಡಾಮಣಿಯನಿತ್ತು ಹರಿಗಳ ಕೂಡಿ 

ಶರಧಿಯನು ಕಟ್ಟಿ ಅರಿಬಲವ ಕುಟ್ಟಿ 

ಉರಗ ಬಂಧನದಿಂದ ಕಪಿವರರರು ಮೈಮರೆಯೆ 

ಗಿರಿಯ ಸಂಜೀವನವ ತಂದು ಬದುಕಿಸಿದೆ ||೨||


ದ್ವಾಪರಾಂತ್ಯದಿ ಪಾಂಡು ಭೂಪನಾತ್ಮಜನೆನಿಸಿ 

ಶ್ರೀಪಾರ್ಥ ಸಾರಥಿಯ ಭಜಕ ನೀನಾದೆ 

ಪಾಪಿ ಮಾಗಧ ಬಕ ಕೀಚಕ ಹಿಡಿಂಬಕರ 

ಕೋಪದಿಂದಲಿ ತರಿದೆ ಮೂಜಗದಿ ಮೆರೆದೆ ||೩||


ಧುರದಲಿ ದುರ್ಯೋಧನನ ಬಲವನು ತಂದೆ 

ಆರಿತು ದುಶ್ಕಾಸನನ ಒಡಲನ್ನು ಬಗೆದೆ 

ಉರವ ತಪ್ಪಿಸಿ ಕೌರವನ್ನ ತೊಡೆಗಳ ಮುರಿದೆ 

ಹರಿಯ ಕಿಂಕರ ಧುರಂಧರಗಾರು ಸರಿಯೆ ||೪||


ಕಲಿಯುಗದಲಿ ಕಳ್ಳರುದಿಸಿ ದುರ್ಮತಗಳನು 

ಬಲಿಸಿ ಶ್ರೀಹರಿಯ ಗುಣಗಳನು ಮರೆಸಿ

 ಕಲಿಯನನುಸರಿಸಲು ಗುರುವಾಗಿ ಅವತರಿಸಿ 

ಖಳರ ದುರ್ಮತ ಮುರಿದೆ ಶ್ರೀಕೃಷ್ಣ ಪರನೆಂದೆ ||೫||






ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು