|| ನಾರಾಯಣ ಸ್ತುತಿ ||
ನಾರಾಯಣ ಎನ್ನಿರೋ
ಶ್ರೀ ನರಹರಿ ಪಾರಾಯಣ ಪಾಡಿರೋ ||ಪ||
ನಾರಾಯಣನೆಂದು ಅಜಮಿಳನು ಕೈವಲ್ಯ
ಸೇರಿದನೆಂಬೊ ಸುದ್ದಿಯ ಕೇಳಿ ಅರಿಯಿರೋ||ಅ.ಪ||
ಕಾಶಿಗೆ ಪೋಗಲೇಕೆ ಕಾವಡಿ ಪೊತ್ತು ಬೇಸತ್ತು ತಿರುಗಲೇಕೆ
ವಾಸುದೇವನ ನಾಮ ಬಾಯ್ತುಂಬ ನೆನೆದರೆ,
ಕ್ಲೇಶಗಲೆಂಬೊದು ಲೇಶ ಮಾತ್ರವಿಲ್ಲ ॥ ೧॥
ಚೋರರ ಭಯವಿಲ್ಲವೊ
ಹರಿ ನಾಮಕೆ ಯಾರ ಅಂಜಿಕೆ ಇಲ್ಲವೊ
ಊರನಾಳುವ ದೊರೆಗೆ ನೀತಿ ಭೀತಿಗಳಿಲ್ಲ
ಘೋರ ಪಾತಕವೆಲ್ಲ ದೂರ ಮಾಡುವುದಕ್ಕೆ ||೨||
ಸ್ನಾನವ ಮಾಡಲೇಕೆ ಮಾನವರಿಗೆ ಮೌನ ಮಂತ್ರಗಳೇತಕೆ
ದೀನ ಪಾಲಕ ನಮ್ಮ ಬೆಟ್ಟದ ಒಡೆಯನ್ನ
ಧ್ಯಾನಕ್ಕೆ ಸರಿಯುಂಟೆ ಪುರಂದರ ವಿಠ್ಠಲ ||೩||
ನಾರಾಯಣ ಶ್ರೀಮನ್ನಾರಾಯಣ
ಸತ್ಯನಾರಾಯಣ ಲಕ್ಷ್ಮೀನಾರಾಯಣ ಎನ್ನಿರೋ
ಶ್ರೀ ನರಹರಿ ಪಾರಾಯಣ ಮಾಡಿರೋ
0 ಕಾಮೆಂಟ್ಗಳು